ಬಿ.ಟಿ. ಲಲಿತಾ ನಾಯಕ್, ಸಾತಿ ಸುಂದರೇಶ್, ವಿಜಯಸಿಂಘ್ ಆರ್. ಡೇವಿಡ್ ಮತ್ತು ಕೆ. ನಾಗಭೂಷಣ್ ರಾವ್ ರವರನ್ನು 2013 ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಚುನಾಯಿಸಬೇಕೆಂದು ಮತದಾರ ಭಾಂದವರಲ್ಲಿ ಆಗ್ರಹ
1. ಡಾ. ಬಿ.ಟಿ. ಲಲಿತಾ ನಾಯಕ್, ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ, ಬೆಂಗಳೂರು ನಗರ ಜಿಲ್ಲೆ, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ
2. ಸಾತಿ ಸುಂದರೇಶ್, ಮೂಡಿಗೆರೆ ವಿಧಾನಸಭಾ ಕ್ಷೇತ್ರ, ಚಿಕ್ಕಮಗಳೂರು ಜಿಲ್ಲೆ, ಭಾರತ ಕಮ್ಯೂನಿಸ್ಟ್ ಪಕ್ಷ
3. ವಿಜಯಸಿಂಘ್ ಆರ್. ಡೇವಿಡ್, ವಿರಾಜಪೇಟೆ ವಿಧಾನಸಭಾ ಕ್ಷೇತ್ರ, ಕೊಡಗು ಜಿಲ್ಲೆ, ಸ್ವತಂತ್ರ ಅಭ್ಯರ್ಥಿ
4. ಕೆ. ನಾಗಭೂಷಣ್ ರಾವ್, ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರ, ಬಳ್ಳಾರಿ ಜಿಲ್ಲೆ, ಭಾರತ ಕಮ್ಯೂನಿಸ್ಟ್ ಪಕ್ಷ
ಹತ್ತರವಾದ ಪಾತ್ರವಹಿಸಿದ್ದಾರೆ. ಜಿಲ್ಲೆಯಲ್ಲಿ ಆದಿವಾಸಿಗಳು ಹಾಗೂ ಇತರೇ ಪಾರಂಪರಿಕ ಅರಣ್ಯ ವಾಸಿಗಳಾದ ಕೊಡವ, ಗೌಡ, ಐರಿ, ಕುಡಿಯ, ನಾಯಕ, ಬಿಲ್ಲವ, ಕಾಪಾಳ, ಪಾಲೆ, ಕೆಂಬಟ್ಟಿ ಮುಂತಾದ ಸಮುದಾಯಗಳಿಗೆ ಅವರ ಪಿತ್ರಾರ್ಜಿತ ಸ್ವತ್ತಾದಂತಹ ಅರಣ್ಯ ಭೂಮಿಯ ಅರಣ್ಯ ಹಕ್ಕನ್ನು ಗೌರವಿಸಿ ಹಕ್ಕುಪತ್ರ ನೀಡುವ ಪ್ರಕ್ರಿಯೆಯೆಡೆಗೆ ಕಾರ್ಯಪ್ರವೃತ್ತರಾಗಿದ್ದಾರೆ.
ಈ ಎಲ್ಲಾ ಮೇಲಿನ 4 ನಾಯಕರುಗಳು ಸ್ವಚ್ಛ, ಪ್ರಜಾಸತ್ತಾತ್ಮಕ, ಜಾತ್ಯತೀತ, ಮೌಲ್ಯಾಧಾರಿತ ರಾಜಕೀಯಕ್ಕಾಗಿ ಬದ್ದರಾಗಿದ್ದು ಹಲವಾರು ವರ್ಷಗಳಿಂದ ಸಾಮಾಜಿಕ ನ್ಯಾಯ ಮತ್ತು ಮಾನವ ಹಕ್ಕುಗಳ ಹೋರಾಟಗಳನ್ನು ನಡೆಸಿಕೊಂಡುಬರುತ್ತಿದ್ದಾರೆ. ಪ್ರಜಾ ರಾಜಕೀಯ ವೇದಿಕೆ ಸದಸ್ಯರು ಮತ್ತು ಮಿತ್ರರೆಲ್ಲರೂ ಸಕ್ರೀಯವಾಗಿ
ಈ ಮೇಲಿನ ಅಭ್ಯರ್ಥಿಗಳಿಗೆ ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ. ಈ ಎಲ್ಲಾ ಅಭ್ಯರ್ಥಿಗಳು ಆಯ್ಕೆಯಾಗಿ ಮುಂದಿನ ಕರ್ನಾಟಕ ವಿಧಾನಸಭೆಯಲ್ಲಿ ಬಡವರ, ಕಾರ್ಮಿಕರ, ಮಹಿಳೆಯರ, ದಲಿತರ, ಆದಿವಾಸಿಗಳ, ಹಿಂದುಳಿದ ವರ್ಗಗಳ…